ಸನ್ಯಾಸಿ ರತ್ನ

ಯಿಂದ್ ಒಬ್ಬ ಬೌದ್ದ ಸನ್ಯಾಸಿ
ಮರದಡಿ ತನ್ನ ಬಟ್ಟೆ ಆಸಿ
ಕುಂತಿದ್ದ ಪದುಮಾಸನಾಕಿ-
ಕಣ್ ಮುಚ್ಚೋದ್ ಒಂದೇನೆ ಬಾಕಿ! ೧

ಕಾಲಿಗ್ ಔನ್ ಮುಂದಾಗ ತೊದಲು
ಬಂದಂಗೆ ಯೆಣ್ ಒಬ್ಳು ಓದ್ಲು-
ಘಮ್ಮಂತ ವಾಸ್ನೆ ಸುಳದಂಗೆ!
ಫಳ್ಳಂತ ಮಿಂಚು ವೊಳದಂಗೆ! ೨

ತಂಗೆ ಕಣ್ ಮಾಡ್ದೊಳ ಕುರ್‍ತಿ
‘ಚಂದದೀ ದೇದಾಗ ಬರ್‍ತಿ
ಒಲ್ಸೇನೆ!’ ಅಂದಿ ಸನ್ನಾಸಿ
‘ಛೆ’ ಅಂದ ಮನದಾಗ ಯೇಸಿ ೩

‘ಒರಗೀನ್ ಅಲಂಕಾರ ತಳಕು!
ಒಳಗಿನ್ದ ಕಂಡ್ರೇನೆ ಬೆಳಕು!’
ಅಂದಿ ಆ ಬೌದ್ದ ಸನ್ನಾಸಿ
ಯಾರ್‍ತಿದ್ದ ಸತ್ಯಾನ ಸೋಸಿ! ೪

ನಾನೂನೆ ಅಂಗೆ ಸನ್ನಾಸಿ!
ಮೂರೊತ್ತು ಯೆಂಡಾನ ಮೂಸಿ
ಮರ್‍ತ್ ಬುಡ್ತೀನ್ ಬುಂಡೇನ ತುರ್‍ತು!
ಒಳಗೀನ್ ಒಂದ್ ಯೆಂಡೆ ನಂಗ್ ಗುರ್‍ತು? ೫
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಮ್ಮ
Next post ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys